ಸುಖಧರೆ ಪಿಕ್ಚರ್ಸ್ ಲಾಂಛನದಡಿಯಲ್ಲಿಕೆ.ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಈ ವರ್ಷದಅದ್ದೂರಿ ಚಿತ್ರವೆಂದೇ ಬಿಂಬಿತವಾಗಿರುವ ಅಂಬರೀಶ ಈಗ ಅಂತಿಮ ಹಂತತಲುಪಿದೆ.
ಚಿತ್ರಕ್ಕಾಗಿ ಅಸುಕು, ಪಸುಕು ಲಸಕು ಮುಸುಕು ನನ್ನ ಒಳಗೆ ಛಳಕು ಛಳಕು
ಮುಸುಕು ಮಸುಕು ಮನಸ್ನಲ್ಲಿ ಇಣುಕು ಸೊಂಟದಲ್ಲಿತೆಗಿಯೋ ಉಳುಕು
ಎಂಬ ಗೀತೆಯನ್ನು ದರ್ಶನ್ ಪ್ರಿಯಾಮಣಿ ಅಭಿನಯದೊಂದಿಗೆ ಅಬ್ಬಾಯಿ ನಾಯ್ಡು ಸ್ಟುಡಿಯೋವಿನಲ್ಲಿ ೫೦ ಲಕ್ಷರೂ.ವೆಚ್ಚದಲ್ಲಿ ಈಶ್ವರಿ ಕುಮಾರ್ ಹಾಕಿದ್ದ ಭವ್ಯಸೆಟ್ನಲ್ಲಿ ಗಣೇಶ್ (ಹೈದ್ರಾಬಾದ್) ನೃತ್ಯ ನಿರ್ದೇಶನದೊಂದಿಗೆ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಕೆ.ಮಹೇಶ್ ಸುಖಧರೆ ಚಿತ್ರಿಸಿಕೊಂಡರು.
ಚಿತ್ರಕ್ಕೆಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಾಹಿತ್ಯ ನಾಗೇಂದ್ರ ಪ್ರಸಾದ್, ಸಂಗೀತ ಹರಿಕೃಷ್ಣ, ಕಲೆ ಈಶ್ವರಿಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.
ಡಾ|| ಅಂಬರೀಶ್, ದರ್ಶನಜೊತೆಗೆ ಬಹುಭಾಷಾತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯ ರಚಿತಾರಾಮ್, ರೇಖಾ, ಬಾಲಿವುಡ್ನ ಖ್ಯಾತ ಖಳ ನಾಯಕ ಕಲ್ಲಿದೋಜಿಣ, ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು, ಮೊದಲಾದ ಭರ್ಜರಿ ತಾರಾಗಣ ಚಿತ್ರದಲ್ಲಿದೆ.